ಬೆಂಗಳೂರು : ನಗರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಯಿತು.
ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿಗಳಾದ ರಘುನಂದನ್ ಉದ್ಘಾಟಿಸಿದರು. ಸೇವಾಲಾಲ್ ಕುರಿತ ಉಪನ್ಯಾಸವನ್ನು ಸಾಹಿತಿ ಡಾ ಎ ಆರ್ ಗೋವಿಂದ ಸ್ವಾಮಿ ನಡೆಸಿದರು.
ಸಮಾರಂಭದಲ್ಲಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಿ ಬಿ.ನಾಯಕ್, ವಕೀಲ ಅನಂತ ನಾಯಕ್, ಬಂಜಾರ ಅಕಾಡೆಮಿಯ ಹರಿಲಾಲ್ ಪವರ್ ಮುಂತಾದವರು ಉಪಸ್ಥಿತರಿದ್ದರು.
ಮಾಲತೇಶ್ ಅರಸ್. ನ್ಯೂಸ್ ಎಡಿಟರ್.