ಚಿತ್ರದುರ್ಗ ; ಜಿಲ್ಲೆಯ ಕಾಟೀಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭ ನಡೆಯಿತು.
ಶಾಸಕ. ಜಿ. ಹೆಚ್. ತಿಪ್ಪಾರೆಡ್ಡಿ ಅವರು ಕೊಠಡಿ ಉದ್ಘಾಟನೆ ಮಾಡಿದರು. ಶಿಕ್ಷಣ ಇಲಾಖಾ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕರಾದ ನೀಲಕಂಠಾಚಾರ್, ECO ಕೃಷ್ಣ ಮೂರ್ತಿ, CRP ಕುಮಾರ್ ಸ್ವಾಮಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜುನಾಯ್ಕ್, ನೌಕರರ ಸಂಘದ ಖಜಾಂಚಿಯಾದ ವೀರೇಶ್, ಶಾಲೆಯ ಮುಖ್ಯೋಪಾಧ್ಯಾಯ ಬಿ. ಹೆಚ್ ತಿಪ್ಪೇಸ್ವಾಮಿ, ಲೇಖಕಿ ಗೀತಾ ಇದ್ದರು.
ತಾಲೂಕು ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು, ಊರಿನ ಗ್ರಾಮಸ್ಥರುಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಸಮಸ್ತ ಗ್ರಾಮಸ್ಥರು ಮತ್ತು ಮಕ್ಕಳು ಭಾಗವಹಿಸಿದ್ದರು.