ಚಿತ್ರದುರ್ಗದ ಸಮೀಪ ಭೀಕರ ಅಪಘಾತ ಮೂವರು ಸಾವು.

Chitradurga Crime

ಸುದ್ದಿವಾಣಿ ನ್ಯೂಸ್ : ಚಿತ್ರದುರ್ಗದ ಸಮೀಪದ ಸೀಬಾರ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 48 ರ ಬಳಿ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಶಿರಾಡಿಗೆ ತೆರಳುತ್ತಿದ್ದ KA 02 MP 7683 ನಂಬರಿನ ಫಾರ್ಚೂನರ್ ಕಾರು, ಬೆಂಗಳೂರು ಕಡೆಗೆ ತೆರಳುತ್ತಿದ್ದ OD 03 M 9492 ನಂಬರಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 3 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಮನೀಶ್ 40 ವರ್ಷ, ಸಿಂಚನಾ 35 ವರ್ಷ, ಭೂಮಿಕಾ 19 ಎಂದು ಗುರುತಿಸಿದ್ದು, ಎಲ್ಲರೂ ಬೆಂಗಳೂರಿನ ರಾಜಾಜಿನಗರದವರು. ಕಂಗುಮಠ (ಲಾರಿ ಕ್ಲೀನರ್)ಗಿರಿಧರ,
ಆಶಾ ಕಿರಣ್. ಗಾಯಗೊಂಡಿದ್ದಾರೆ. ಸ್ಥಳಕ್ಕೆ ಎಸ್.ಪಿ ಪರಶುರಾಮ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ತನಿಖೆ ನಡೆಸಿದರು.

ಇಂದು ಬೆಳಗಿನ ಜಾವ ತುಮಕೂರು ಜಿಲ್ಲೆಯಲ್ಲಿ ಅಪಘಾತ ಸಂಭವಿಸಿ ಒಂಭತ್ತು ಮಂದಿ ಸಾವನ್ನಪ್ಪಿದ್ದರು. ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು ಆತಂಕ ಸೃಷ್ಟಿಸಿದೆ.

 

ಮಾಲತೇಶ್ ಅರಸ್.  ನ್ಯೂಸ್ ಎಡಿಟರ್.

ರಾಜ್ಯ ಜಂಟಿ ಕಾರ್ಯದರ್ಶಿ. ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಪೋರಂ.

Leave a Reply

Your email address will not be published. Required fields are marked *