ಮಾರ್ಚ್ 6 ಕ್ಕೆ “ಕುರುಕ್ಷೇತ್ರ’ ಅಮೋಘ ಎರಡನೇ ಪ್ರದರ್ಶನ ”
ಚಿತ್ರದುರ್ಗ: ಪ್ರೇ ಕ್ಷಕರ ಒತ್ತಾಯದ ಮೇರೆಗೆ ಚಿತ್ರದುರ್ಗ ವಕೀಲರ ಸಂಘದಿಂದ ಕುರುಕ್ಷೇತ್ರ ನಾಟಕವನ್ನು 2023ರ ಮಾರ್ಚ್ ಆರನೇ ತಾರೀಖು ಚಿತ್ರದುರ್ಗದ ನ್ಯಾಯಾಲಯದ ಮುಂಭಾಗ ಎರಡನೇ ಪ್ರದರ್ಶನ ಮಾಡಲಿದ್ದು, ನಾಟಕದ ಪ್ರಚಾರದ ಪೋಸ್ಟರ್ ಅನ್ನು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮನಗೋಳಿ ಪ್ರೇಮಾವತಿ ಮೇಡಂ ಅವರು ಬಿಡುಗಡೆ ಮಾಡಿದರು.
ವಕೀಲರ ಸಂಘದ ಅಧ್ಯಕ್ಷರಾದ ಶಿವುಯಾದವ್, ಉಪಾಧ್ಯಕ್ಷರಾದ ದಯಾನಂದ್, ಪ್ರಧಾನ ಕಾರ್ಯದರ್ಶಿ ಮೂರ್ತಿ, ನಾಟಕದ ನಿರ್ದೇಶಕರಾದ ವಿಜಯ ಕುಮಾರ್ ಮ್ಯಾನೇಜರ್ ವೀರೇಶ್, ಕಲಾವಿದ ವಕೀಲರಾದ , ಶರಣಯ್ಯ, ಎಂ.ಕೆ.ಲೋಕೇಶ್, ಮಾಲತೇಶ್ ಅರಸ್, ಲಕ್ಷ್ಮಿಪತಿ ಇತರರು ಇದ್ದರು..